ರೀರೆಕಾರ್ಡಿಂಗ್‌ನಲ್ಲಿ `ಮಂಗನ ಕೈಲಿ ಮಾಣಿಕ್ಯ`
Posted date: 31 Mon, Dec 2012 ? 05:17:34 PM

ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ‘ಮಂಗನ ಕೈಲಿ ಮಾಣಿಕ್ಯ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಾಮಶ್ಯಾಮಭಾಮ, ಸತ್ಯವಾನ್‌ಸಾವಿತ್ರಿ, ಕಳ್‌ಮಂಜ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಖ್ಯಾತರಾಗಿರುವ ರಾಜೇಂದ್ರಕಾರಂತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.
      ಚಿತ್ರಕ್ಕೆ ಬೆಂಗಳೂರು, ಮೈಸೂರಿನಲ್ಲಿ ಮೂವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.
      ರಮೇಶ್‌ಅರವಿಂದ್, ರವಿಶಂಕರ್‌ಗೌಡ, ರಂಗಾಯಣರಘು, ಹರ್ಷಿಕಾಪೂಣಚ್ಛ, ಸೋನಿಯಾಗೌಡ, ಖುಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
       ನಿರ್ದೇಶಕರೇ ಕಥೆ, ಚಿತ್ರಕೆಥೆ, ಸಂಭಾಷಣೆ ಬರೆದು ಹಾಡುಗಳನ್ನು ರಚಿಸಿದ್ದಾರೆ. ಜೆ.ಜಿ.ಕೃಷ್ಣ ಚಾಯಾಗ್ರಹಣ, ರಾಜೇಶ್‌ರಾಮನಾಥ್ ಸಂಗೀತ, ನಾಗೇಂದ್ರಅರಸ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯನಿರ್ದೇಶನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನ ‘ಮಂಗನ ಕೈಲಿ ಮಾಣಿಕ್ಯ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed